ಇದು ನನ್ನ ಫೇಸ್ಬುಕ್ ಖಾತೆಯಲ್ಲಿ ಬರಕೊಂಡ ಬರಹ :
ಯಂತ್ರಗಳ ಮಾಂತ್ರಿಕ,
ತಾಂತ್ರಿಕತೆಯ ರೂಪಕ..
ದುಃಖೀ ಕನಸುಗಳ ಮಿಶ್ರಿತ
ಸುಖೀ ಜೀವನದ ಆಶ್ರಿತ...
ಕುಂಚವ ಹಿಡಿಯುವ ಚಿತ್ರಕಾರ,
ಕಂಚಿನ ಕಂಠದ ಗಾಯಕ..
ಕಣ್ಣಲ್ಲೇ ಸೆರೆಹಿಡಿಯುವೆ ಚಿತ್ರಸೌಂದರ್ಯ.
ಮನದ ಕನ್ನಡಿಯಂತೆ ನಿನ್ನ ಕವನಗಳ ಆಂತರ್ಯ..
ನಿನ್ನಲ್ಲಿ ಏನಿಲ್ಲ..
ಇದ್ದುದರ ಪರಿವೆಯಿಲ್ಲ..
ಎಲ್ಲ ಇದ್ದೂ ಏನೂ ಸಾಧಿಸದಿರುವೆ..
ಎಲ್ಲ ಸಾಧಿಸಿ ಇನ್ನೂ ಅಳುತಿರುವೆ..
ನೆನೆದು ಗಮ್ಯವ ನಡೆಯುತಿರು ಗುರಿಕಾರ..
ಭಾರತಿಯ ಉಜ್ವಲ ಭವಿಷ್ಯಕ್ಕೆ ನೀ ಹರಿಕಾರ..
ತಲುಪುವಂತವನಾಗು ವಿಶ್ವೇಶ್ವರಯ್ಯನವರ ಎತ್ತರ..
ಓ ಅಭಿಯಂತರ..
ಮೌಢ್ಯದ ಜೀವನ-ಪ್ರಶ್ನೆಗೆ ನೀನಾಗು ಉತ್ತರ... :-)
ಯಂತ್ರಗಳ ಮಾಂತ್ರಿಕ,
ತಾಂತ್ರಿಕತೆಯ ರೂಪಕ..
ದುಃಖೀ ಕನಸುಗಳ ಮಿಶ್ರಿತ
ಸುಖೀ ಜೀವನದ ಆಶ್ರಿತ...
ಕುಂಚವ ಹಿಡಿಯುವ ಚಿತ್ರಕಾರ,
ಕಂಚಿನ ಕಂಠದ ಗಾಯಕ..
ಕಣ್ಣಲ್ಲೇ ಸೆರೆಹಿಡಿಯುವೆ ಚಿತ್ರಸೌಂದರ್ಯ.
ಮನದ ಕನ್ನಡಿಯಂತೆ ನಿನ್ನ ಕವನಗಳ ಆಂತರ್ಯ..
ನಿನ್ನಲ್ಲಿ ಏನಿಲ್ಲ..
ಇದ್ದುದರ ಪರಿವೆಯಿಲ್ಲ..
ಎಲ್ಲ ಇದ್ದೂ ಏನೂ ಸಾಧಿಸದಿರುವೆ..
ಎಲ್ಲ ಸಾಧಿಸಿ ಇನ್ನೂ ಅಳುತಿರುವೆ..
ನೆನೆದು ಗಮ್ಯವ ನಡೆಯುತಿರು ಗುರಿಕಾರ..
ಭಾರತಿಯ ಉಜ್ವಲ ಭವಿಷ್ಯಕ್ಕೆ ನೀ ಹರಿಕಾರ..
ತಲುಪುವಂತವನಾಗು ವಿಶ್ವೇಶ್ವರಯ್ಯನವರ ಎತ್ತರ..
ಓ ಅಭಿಯಂತರ..
ಮೌಢ್ಯದ ಜೀವನ-ಪ್ರಶ್ನೆಗೆ ನೀನಾಗು ಉತ್ತರ... :-)
No comments:
Post a Comment